Monday, February 08, 2010

ಸದಾನಂದ

ಸ್ಮಶಾನದಲ್ಲಿ ಅವನು ಅಳುತ್ತಾ ಕೂತಿದ್ದ. ಅವನ ತಂದೆ, ಅವನಿಗಿದ್ದ ಒಂದೇ ಆಸರೆ, ಅವನನ್ನಗಲಿದ್ದ. ತನಗಿನ್ನಾರು ದಿಕ್ಕು? ತಾನಿನ್ನು ಒಬ್ಬಂಟಿ ಎಂದು ಮರುಗುತ್ತಿದ್ದ.

ಸ್ಮಶಾನದ ಚಂಡಾಳ ಇವನನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಕೆಲಸವೆಲ್ಲ ಮುಗಿದಿತ್ತು. ಆ ದಿನ ಹೆಣ ಸುಟ್ಟು, ೩-೪ ಹೆಣಗಳನ್ನು ಹೂತಿದ್ದ.

ಇವನ ಬಳಿ ಬಂದು ಕೇಳಿದ: "ಯಾಕ್ ಮರಿ ಅಳತ ಇದ್ದೀಯ? ಮನೆಗ್ ಒಗಾಕಿಲ್ವ?"

"ನಮ್ಮಯ್ಯ ಸತ್ತ್ಹೊಗವ್ರೆ! ನಂಗ್ಯಾರು ಗತಿ ಇಲ್ಲ. ಮನೆಗ್ ಹೋದ್ರೆ ಬರೀ ಅಯ್ಯನ್ನ್ ನೆನಪೆ ಬತ್ತೈತೆ. ನಾ ಮನೆಗ್ ಹೊಗಾಕಿಲ್ಲ"

"ಹಂಗಲ್ಲ ಅನ್ನ್ಬ್ಯಾಡದು ಮಗಾ! ಮೇಲಿರೋ ನಿಮ್ಮಯ್ಯನ್ಗೆ ಸಿಟ್ಟ ಬರಾಕಿಲ್ವ? ಓಗು! ಮನೆಗ್ ಹೋಗಿ ಸಂದಾಗ್ ಬದುಕು"

"ನಾ ಒಗಾಕಿಲ್ಲಂದ್ರೆ ಒಗಾಕಿಲ್ಲ".

"ನೀ ಹೀಂಗ್ ಹೇಳಿದ್ರೆ ಹೋಗಲ್ಲ. ಇಲ್ ಬಾ. ಇದ ನೋಡು. ಏನಿದು?"

"ತಲೆ ಬುಲ್ಡೆ ಕಣ್ ಏಳು".

"ಇದ ಯಾವಗಾನ ಅತ್ತಿದ್ದೂ ಬೇಜಾರ್ ಮಾಡ್ಕಂದಿದ್ದೂ ನೀ ಕಂಡೀಯ?"

"ಏಯ್! ಆದ ಯಾಕ್ ಬೇಜಾರ್ ಮಾಡ್ಕತ್ತದೆ? ಅದ್ಕೆನ್ ಬುದ್ದಿ ಐತಾ?"

"ಅದೇ ನಾನು ಏಳೋದು. ನೀ ಬ್ಯಾಜಾರ್ ಮಾಡ್ಕಂದ್ರೂ, ಸಿಟ್ಟ ಮಾಡ್ಕಂದ್ರೂ ಏನೇ ಮಾಡ್ಕಂದ್ರೂ ಈ ತಲೆ ಬುಲ್ಡೆ ಮಾತ್ರ ಯಾವಾಗಲೂ ನಗ್ತಾ ಇರ್ತದೆ. ಅಳೋ ತಲೆ ಬುಲ್ಡೆ ನ ಯಾರೂ ಇಲ್ಲೀಗಂಟ ಕಂಡೇ ಇಲ್ಲ. ತಿಳ್ಕ. ನೀ ಹೆಂಗೆ ಇರು, ಈ ಬುಲ್ಡೆ ಮಾತ್ರ ಯಾವಾಗಲೂ ನಗ್ತಾನೆ ಇರ್ತೈತೆ. ಹಂಗೆ ಏನೇ ಆದ್ರೂ ನೀನು ನಗ್ತಾನೆ ಇರ್ಬೇಕು. ಈಗ ನಿಮ್ಮಪ್ಪ ಸತ್ತೋದ್ರು ಅಂತ ನೀ ಸುಮ್ಕಿದ್ದ್ರೆ ನೀನು ಸತ್ತ್ಹೊಯ್ತೀ. ನಿಮ್ಮಪ್ಪ ನಿನ್ನ ಕಷ್ಟ ಪಟ್ಟು ಸಾಕಿದ್ದು ಇದ್ಕೆಯ? ಹೋಗು. ಕಷ್ಟ ಪಟ್ಟು ದುಡಿದು ನಿಮ್ಮಪ್ಪನ್ ಋಣ ತೀರ್ಸೋಗು. "

ಬಾಳಿನಲ್ಲಿ ಏನೋ ಹೊಸ ಅರ್ಥ ಕಂಡ ಆ ಹುಡುಗ ಮುನ್ನಡೆದ.

3 comments:

Shrinidhi Hande said...

nice. your creation?

Unknown said...

hehe! yes! =)

Shrinidhi Hande said...

Good.. Keep it up :)